Monday 2 January 2012

ಕವನ ಸಂಕಲನಗಳ ಬಿಡುಗಡೆ



ಮಂಗಳೂರು ತಾಲೂಕು ಚುಟಕ ಸಾಹಿತ್ಯ ಪರಿಷತ್ ವತಿಯಿಂದ ನಿನ್ನೆ ನಗರದಲ್ಲಿ ಶೈಲಜಾ ಪುದುಕೋಳಿ ಅವರ "ಕಣಿವೆಯಾಳದ ಕಾವ್ಯ" ಹಾಗೂ ಶಶಿಕಲಾ ಕದ್ರಿಯವರ "ಇಳಿಹೊತ್ತಿನ ಕೈ ತುತ್ತು" ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದೆ. ಅಧ್ಯಕ್ಷತೆಯನ್ನು ಸುರತ್ಕಲ್ ಗೋವಿಂದದಾಸ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ಕೃಷ್ಣಮೂರ್ತಿ ಪಿ. ವಹಿಸಿದ್ದರು. ಭಾವದಿಂದ ಧ್ವನಿ, ಧ್ವನಿಯಿಂದ ಸೂಚ್ಯತೆ, ಸೂಚ್ಯತೆಯಿಂದ ಅರ್ಥವಿಪುಲತೆ- ಆಗ ಮಾತ್ರ ಒಳ್ಳೆಯ ಕಾವ್ಯ ಮೂಡಿಬರುತ್ತದೆ ಎಂಬುದು ನನ್ನ ಮಾತಿನ ಮುಖ್ಯಾಂಶವಾಗಿತ್ತು. ಪುಸ್ತಕ ಬಿಡುಗಡೆಯ ಬಳಿಕ ವಿವಿದ ಕವಿಗಳ ಭಾಗವಹಿಸುವಿಕೆಯಲ್ಲಿ ಕವಿಗೋಷ್ಠಿ ಆಯೋಜಿಸಲಾಗಿತ್ತು.


No comments:

Post a Comment