Monday 6 February 2012

ಒಂದು ಸಾಹಿತ್ಯ ವಿಚಾರಸಂಕಿರಣ 


ಪುತ್ತೂರಿನ ಕರ್ನಾಟಕ ಸಂಘವು ತನ್ನ ವಾರ್ಷಿಕ ಸಾಹಿತ್ಯ-ಸಂಸ್ಕೃತಿ ಸಲ್ಲಾಪದ ಅಂಗವಾಗಿ ನಿನ್ನೆ  ಫೆಬ್ರವರಿ ೫ ರಂದು ಸಾಹಿತ್ಯ ಗೋಷ್ಠಿಯನ್ನು ಹಮ್ಮಿಕೊಂಡಿತ್ತು. 'ಮೂರು ಗಮನಾರ್ಹ ಕೃತಿಗಳು' ಎಂಬ ಶೀರ್ಷಿಕೆಯಲ್ಲಿ ಡಿ.ಕೆ.ಚೌಟರ ಮಿತ್ತಬೈಲು ಯಮುನಕ್ಕೆ, ಗುರುರಾಜ ಮಾರ್ಪಳ್ಳಿಯವರ ಖ್ಯಾಲ್ ಖಯಾಲುಗಳು ಮತ್ತು ನಾಗವೇಣಿಯವರ ಗಾಂಧಿ ಬಂದ ಕೃತಿಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗಿತ್ತು. ಡಾ.ರಾಜಶ್ರೀ, ಆನಂದ ಕೊಡಿಮ್ಬಳ ಮತ್ತು ಅನುಪಮಾ ಪ್ರಸಾದ್ ಅವರು ಕೃತಿ ವಿಮರ್ಶೆ ನಡೆಸಿಕೊಟ್ಟರು.



ನಾನು ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಸಾಹಿತ್ಯ ಕೃತಿಗಳನ್ನು ವಿಮರ್ಶಕರು ಮತ್ತು ಸಾಹಿತ್ಯಪ್ರಿಯರು ಚರ್ಚಿಸಿದರೆ ಅವುಗಳ ಶಕ್ತಿ ಮತ್ತು ಮಿತಿಗಳನ್ನು ಅರಿತಂತಾಗುತ್ತದೆ, ಸಾಹಿತ್ಯೇತರರು ಚರ್ಚೆಗೆ ಎತ್ತಿಕೊಂಡಾಗ ಅದು ಚೌಕಟ್ಟಿನಿಂದ ಆಚೆಗೆ ನಿಂತು ತಪ್ಪು ತಿಳಿವಳಿಕೆಗಳಿಗೆ ಕಾರಣವಾಗುತ್ತದೆ, ಈ ವಿಚಾರಸಂಕಿರಣ ಒಂದು ಒಳ್ಳೆಯ ಪ್ರಯತ್ನ ಎಂದು ನಾನು ಹೇಳಿದೆ. 
ಒಂದು ಸಾಹಿತ್ಯ ವಿಚಾರಸಂಕಿರಣ 


ಪುತ್ತೂರಿನ ಕರ್ನಾಟಕ ಸಂಘವು ತನ್ನ ವಾರ್ಷಿಕ ಸಾಹಿತ್ಯ-ಸಂಸ್ಕೃತಿ ಸಲ್ಲಾಪದ ಅಂಗವಾಗಿ ಮೊನ್ನೆ ಫೆಬ್ರವರಿ ೫ ರಂದು ಸಾಹಿತ್ಯ ಗೋಷ್ಠಿಯನ್ನು ಹಮ್ಮಿಕೊಂಡಿತ್ತು. 'ಮೂರು ಗಮನಾರ್ಹ ಕೃತಿಗಳು' ಎಂಬ ಶೀರ್ಷಿಕೆಯಲ್ಲಿ ಡಿ.ಕೆ.ಚೌಟರ ಮಿತ್ತಬೈಲು ಯಮುನಕ್ಕೆ, ಗುರುರಾಜ ಮಾರ್ಪಳ್ಳಿಯವರ ಖ್ಯಾಲ್ ಖಯಾಲುಗಳು ಮತ್ತು ನಾಗವೇಣಿಯವರ ಗಾಂಧಿ ಬಂದ ಕೃತಿಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗಿತ್ತು. ಡಾ.ರಾಜಶ್ರೀ, ಆನಂದ ಕೊಡಿಮ್ಬಳ ಮತ್ತು ಅನುಪಮಾ ಪ್ರಸಾದ್ ಅವರು ಕೃತಿ ವಿಮರ್ಶೆ ನಡೆಸಿಕೊಟ್ಟರು.



ನಾನು ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಸಾಹಿತ್ಯ ಕೃತಿಗಳನ್ನು ವಿಮರ್ಶಕರು ಮತ್ತು ಸಾಹಿತ್ಯಪ್ರಿಯರು ಚರ್ಚಿಸಿದರೆ ಅವುಗಳ ಶಕ್ತಿ ಮತ್ತು ಮಿತಿಗಳನ್ನು ಅರಿತಂತಾಗುತ್ತದೆ, ಸಾಹಿತ್ಯೇತರರು ಚರ್ಚೆಗೆ ಎತ್ತಿಕೊಂಡಾಗ ಅದು ಚೌಕಟ್ಟಿನಿಂದ ಆಚೆಗೆ ನಿಂತು ತಪ್ಪು ತಿಳಿವಳಿಕೆಗಳಿಗೆ ಕಾರಣವಾಗುತ್ತದೆ, ಈ ವಿಚಾರಸಂಕಿರಣ ಒಂದು ಒಳ್ಳೆಯ ಪ್ರಯತ್ನ ಎಂದು ನಾನು ಹೇಳಿದೆ. 

Thursday 2 February 2012



                                                ತಿರೂರಿನ ಕುಂಜನ್ ಮಹೋತ್ಸವದಲ್ಲಿ ನಾನು 


 ಸುಮಾರು ೧೫ನೆ ಶತಮಾನದಲ್ಲಿ ಜೀವಿಸಿದ್ದ ಎಳುತ್ತಚ್ಚನ್ ಕುಂಜನ್ ಮಲಯಾಳಂ ಭಾಷೆ ಮತ್ತು ಸಾಹಿತ್ಯದ ಪಿತಾಮಹನೆಂದು ಕರೆಸಿಕೊಂಡ ಮಹಾನುಭಾವ. ದೇಸೀಯ ಸಂಪನ್ನತೆಯಿಂದ ಕೂಡಿ ಸಹಜ ಕವಿಯಾಗಿದ್ದ ಈತ ಮಲಯಾಳಂನ ಜಾನಪದ ಧಾರೆಯ ಪ್ರವರ್ತಕನೂ ಹೌದು. 
ಕುಂಜನ್  ಹುಟ್ಟಿದನೆಂದು ಭಾವಿಸಲಾಗಿರುವ ಜಾಗದಲ್ಲಿ ನಿರ್ಮಿಸಿರುವ ಆತನ ಸ್ಮಾರಕ 

ಈ ಮಹಾಕವಿಯ ನೆನಪಿಗೆ ಆತನ ಹುಟ್ಟೂರು ಕೇರಳದ ತಿರೂರಿನಲ್ಲಿ ಕುಂಜನ್ ಸ್ಮಾರಕ ಟ್ರಸ್ಟ್ ಅನ್ನು ಹುಟ್ಟು ಹಾಕಿ ಪ್ರತಿ ವರ್ಷ ದೊಡ್ಡ ಮಟ್ಟದ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಈಗ ಆ ಟ್ರಸ್ಟ್ ನ ಅಧ್ಯಕ್ಷರು. ಈ ವರ್ಷ ಕುಂಜನ್ ಉತ್ಸವ ನಿನ್ನೆ ಫೆಬ್ರವರಿ ೧ ರಿಂದ ಆರಂಭಗೊಂಡು ೫ರ ವರೆಗೆ ನಡೆಯುತ್ತಿದೆ.
ಬಹುಭಾಷಾ ಕವಿಗೂಷ್ಟಿಯಲ್ಲಿ ಕವಿತೆ ಮಂಡಿಸುತ್ತಿರುವ  ನಾನು 

ದಕ್ಷಿಣ ಮಧ್ಯ ಸಂಸ್ಕೃತಿ ಇಲಾಖೆಯ ವತಿಯಿಂದ ನಿನ್ನೆ ದಿ.೧ ರಂದು ದಕ್ಷಿಣ ಭಾರತ ಮಟ್ಟದ ವಿವಿಧ ಭಾಷೆಗಳ ಕವಿಗೋಷ್ಟಿಯೊಂದನ್ನು ಆಯೋಜಿಸಲಾಗಿತ್ತು. ಕನ್ನಡವನ್ನು ಪ್ರತಿನಿಧಿಸಿ ನಾನು ಕವಿತೆಗಳನ್ನು ವಾಚಿಸಿದೆ. ಕನ್ನಡ ಭಾಷೆ-ಸಾಹಿತ್ಯದ ಸಂಕ್ಷಿಪ್ತ ಚರಿತ್ರೆ, ಕನ್ನಡ ಕಾವ್ಯದ ಪ್ರಸ್ತುತ ದಿಕ್ಕುದೆಸೆ ಇತ್ಯಾದಿಗಳನ್ನು ವಿವರಿಸಿ ಕವಿತೆಗಳ ಇಂಗ್ಲಿಷ್ ಅನುವಾದಗಳನ್ನೂ ಓದಿದೆ. ಕುಂಜನ್ ಮಹೋತ್ಸವವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿದರು. 

ಡಾ.ಚಂದ್ರಶೇಖರ  ಕಂಬಾರರೊಂದಿಗೆ  ನಾನು  ಪಕ್ಕದಲ್ಲಿ ಮಾತಾದುತ್ತಿರುವವರು  ಮಲಯಾಳಂ ಕವಿ ಗೋಪಿ 

ಮಲಯಾಳಂನ ಪ್ರಸಿದ್ಧ ಕವಿ ಅಕ್ಕಿತ್ತ್ಹಾನ್ ಕವಿಗೊಷ್ಟಿಯನ್ನು ಉದ್ಘಾಟಿಸಿ ಮಾತಾಡಿದರು. ಮೂರು ಗಂಟೆಗಳ ಕಾಲ ನಡೆದ ಕವಿಗೋಷ್ಠಿಯನ್ನು ಸಾವಿರಾರು ಮಂದಿ ಪ್ರೇಕ್ಷಕರು ಕೂತು ಆಲಿಸಿ ಆನಂದಿಸಿದ್ದು ಮರೆಯಲಾರದ ಒಂದು ಅನುಭವ.  
ಮಲಯಾಳಂ ಸಾಹಿತಿ ಎಂ. ಟಿ. ವಾಸುದೇವನ್ ನಾಯರ್  ಜೊತೆ ನಾನು 
   

Wednesday 4 January 2012

ಬರಹಗಾರರ ಸಮ್ಮೇಳನ 


ಮೊನ್ನೆ ಹೊಸವರ್ಷದ ಮೊದಲ ದಿನ ಕುಂದಾಪುರದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬರಹಗಾರರ ಸಮ್ಮೇಳನ ಜರುಗಿತು.  ಅದೇ ದಿನ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು.  ಉದ್ಘಾಟನೆ ಮಾಡಿದ ಬಳಿಕ ನಾನು ಮಾಧ್ಯಮ ಸಾಹಿತ್ಯದ ಬಗ್ಗೆ ಮಾತಾಡಿದೆ. ಕೇವಲ ಇನ್ನೂರು ವರ್ಷಗಳ ಇತಿಹಾಸವಿರುವ ಮುದ್ರಣ ಮಾಧ್ಯಮ ಈ ಎಲೆಕ್ಟ್ರೋನಿಕ್ ಯುಗದಲ್ಲಿ ಬದಲಾವಣೆಯ ಸಂಧಿ ಘಟ್ಟದಲ್ಲಿದೆಯೆಂದು ನಾನು ಪ್ರತಿಪಾದಿಸಿದೆ. ಚಿತ್ರದಲ್ಲಿ ಸಾಹಿತಿ  ಕೆ .ವಿ.ಕೃಷ್ಣಯ್ಯ, ಲೇಖಕ ಎನ್.ಜಿ.ಪಟವರ್ಧನ್, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ಮತ್ತು 'ಕುಂದಪ್ರಭ' ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಅವರನ್ನು ಕಾಣಬಹುದು.

Monday 2 January 2012

ಕವನ ಸಂಕಲನಗಳ ಬಿಡುಗಡೆ



ಮಂಗಳೂರು ತಾಲೂಕು ಚುಟಕ ಸಾಹಿತ್ಯ ಪರಿಷತ್ ವತಿಯಿಂದ ನಿನ್ನೆ ನಗರದಲ್ಲಿ ಶೈಲಜಾ ಪುದುಕೋಳಿ ಅವರ "ಕಣಿವೆಯಾಳದ ಕಾವ್ಯ" ಹಾಗೂ ಶಶಿಕಲಾ ಕದ್ರಿಯವರ "ಇಳಿಹೊತ್ತಿನ ಕೈ ತುತ್ತು" ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದೆ. ಅಧ್ಯಕ್ಷತೆಯನ್ನು ಸುರತ್ಕಲ್ ಗೋವಿಂದದಾಸ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ಕೃಷ್ಣಮೂರ್ತಿ ಪಿ. ವಹಿಸಿದ್ದರು. ಭಾವದಿಂದ ಧ್ವನಿ, ಧ್ವನಿಯಿಂದ ಸೂಚ್ಯತೆ, ಸೂಚ್ಯತೆಯಿಂದ ಅರ್ಥವಿಪುಲತೆ- ಆಗ ಮಾತ್ರ ಒಳ್ಳೆಯ ಕಾವ್ಯ ಮೂಡಿಬರುತ್ತದೆ ಎಂಬುದು ನನ್ನ ಮಾತಿನ ಮುಖ್ಯಾಂಶವಾಗಿತ್ತು. ಪುಸ್ತಕ ಬಿಡುಗಡೆಯ ಬಳಿಕ ವಿವಿದ ಕವಿಗಳ ಭಾಗವಹಿಸುವಿಕೆಯಲ್ಲಿ ಕವಿಗೋಷ್ಠಿ ಆಯೋಜಿಸಲಾಗಿತ್ತು.