Wednesday 16 November 2011

ಮಕ್ಕಳ ದಿನಾಚರಣೆಯ ಅಂಗವಾಗಿ

ಆಗಮನ ಶಾಲೆಯಲ್ಲಿ ಛದ್ಮವೇಷ ಸ್ಫರ್ಧೆ




ಆಗಮನ ಶಾಲೆಯಲ್ಲಿ ನಿನ್ನೆ ಛದ್ಮವೇಷ ಸ್ಪರ್ಧೆ ಜರುಗಿತು. ಸುಮಾರು ನಲವತ್ತೈದು ಮಂದಿ ಮಕ್ಕಳು ಭಾಗವಹಿಸಿದ್ದರು. ಆಗಮ ಪುರೋಹಿತರ ವೇಷ ಧರಿಸಿ ಪೂಜೆ ಮಾಡಿ ಪ್ರಸಾದ ವಿತರಣೆಯನ್ನೂ ಮಾಡಿದ. ಕೊನೆಯಲ್ಲಿ ಫಲಿತಾಂಶ ಘೋಷಿಸಿದಾಗ ಅವನಿಗೆ ಮೊದಲ ಸ್ಥಾನ ಬಂದಿತ್ತು. ಈ ಎರಡು ಭಾವಚಿತ್ರಗಳು ಛದ್ಮವೇಷ ಸ್ಫರ್ಧೆಯ ಸನ್ನಿವೇಶಗಳನ್ನು ತೋರಿಸುತ್ತವೆ.

Friday 11 November 2011

"ಮಂಗಳೂರು" ಸ್ಥಳನಾಮದ ವ್ಯುತ್ಪತ್ತಿ

"ಮಂಗಳೂರು" ಎನ್ನುವ ಸ್ಥಳನಾಮ ಮೇರ್ಕಳ ಎನ್ನುವ ಶಬ್ದದಿಂದ ನಿಷ್ಪನ್ನಗೊಂಡಿರಬೇಕೆಂದು ತೋರುತ್ತದೆ. ಮೇರರ+ಕಳ ಮೇರ್ಕಳ. ಮೇರರು ವಾಸಿಸುತ್ತಿದ್ದ ಸ್ಥಳ ಎಂದು ಇದರ ಅರ್ಥ (ಭಟ್ಟರ+ಕಳ>ಭಟ್ಕಳ ಆದಂತೆ). ಕರಾವಳಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಬ್ಯಾರಿಗಳು ಮಂಗಳೂರನ್ನು ಇವತ್ತಿಗೂ ತಮ್ಮ ಬ್ಯಾರಿ ಭಾಷೆಯಲ್ಲಿ ’ಮೈಕ್ಕಲ’ ಎಂದೇ ಕರೆಯುತ್ತಾರೆ. ಮೇರ್ಕಳ ಎಂಬುದು ಬ್ಯಾರಿ ಭಾಷೆಯಲ್ಲಿ ಅಪಭ್ರಂಶಗೊಂಡು ಮೈಕ್ಕಲ ಆಗಿರಬೇಕು : ಮೇರ್ಕಳ>ಮೈಕ್ಕಲ.

ಕರಾವಳಿಯಲ್ಲಿ ಕನ್ನಡದ ಪ್ರಾದುರ್ಭಾವದ ಬಳಿಕ ಮೇರ್ಕಳ ಅಥವಾ ಮೈಕ್ಕಲ ಸಂಸ್ಕೃತೀಕರಣಗೊಂಡು ’ಮಂಗಲ’ ಆಗಿರುವ ಸಾಧ್ಯತೆ ಇದೆ : ಮೇರ್ಕಳ>ಮೈಕ್ಕಲ>ಮಂಗಲ. ಕ್ರಮೇಣ ಮಂಗಲಕ್ಕೆ ’ಊರು’ ಸೇರಿ ಮಂಗಳೂರು ಆಗಿರಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೈರ್ಕಳ, ಕುಡಾಲ ಮೇರ್ಕಳ ಎಂಬ ಊರುಗಳು ಇವತ್ತಿಗೂ ಇವೆ. ಪರಿಶಿಷ್ಟ ಜಾತಿಯ ಮೇರರು ಕರಾವಳಿಯ ಮೂಲನಿವಾಸಿಗರೂ ಆಗಿದ್ದಾರೆ.