Monday 12 December 2011

ಗಂಗಾವತಿಯಲ್ಲಿ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ 

"ರಾಜ ಎಲ್ಲ ಗೆದ್ದ ಗಜದಂತೆ ಸಿಂಹಾಸನದ ಬಳಿಗೆ ಬಂದ..."
ಅಖಿಲ ಭಾರತ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೊನ್ನೆ ದಿನಾಂಕ ೯,೧೦ ಹಾಗೂ ೧೧ ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿ  ಜರುಗಿತು.  ೧೧ ರಂದು ಬೆಳಗ್ಗೆ ೯.೩೦ ಕ್ಕೆ ಪ್ರಧಾನ ಕವಿಗೋಷ್ಠಿ ಏರ್ಪಾಟಾಗಿತ್ತು. ಕವಿಗೋಷ್ಠಿಯಲ್ಲಿ ಭಾಗವಹಿಸಲು ನಾನು ಆಹ್ವಾನಿತನಾಗಿದ್ದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಡಾ. ಬುದ್ದಣ್ಣ  ಹಿಂಗಮಿರೆ ವಹಿಸಿದ್ದರು. ನಾನು ನನ್ನ "ಭೋಜರಾಜನ ಸಿಂಹಾಸನ" ಎಂಬ ಕವಿತೆ ಓದಿದೆ. ಪ್ರೇಕ್ಷಕರಿಗೆ ಅದು ತಲಪಿತು ಎಂಬುದು ಕರತಾಡನದಿಂದ ತಿಳಿಯಿತು. ಕವಿತೆ ಓದುತ್ತಿರುವ ಎರಡು ದೃಶ್ಯಗಳನ್ನು ನನ್ನ ಬ್ಲಾಗ್ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇನೆ.

"ರಾಜ ಒಂದೇ ಒಂದು ಹೆಜ್ಜೆ ಸಿಂಹಾಸನದತ್ತ ಎತ್ತಿಡಬೇಕು... ಅಷ್ಟರಲ್ಲಿ ಶತ್ರುಗಳು ದಾಳಿಯಿಟ್ಟ ಸುದ್ದಿ ಬಂತು!"

1 comment: