Friday 15 July 2011

ಕವಿ ಎಚ್. ಎಸ್. ವಿ. ಅವರೊಂದಿಗೆ ಒಂದು ಸಂಜೆ

ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ದಾಸ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದರು. ಬಹುಕಾಲದ ಆತ್ಮೀಯ ಗೆಳೆಯ ಎಂಬ ಪ್ರೀತಿಯಿಂದ ಕರೆದ ಕೂಡಲೇ ಆಕಾಶವಾಣಿಗೆ ಬಂದರು. ನಮ್ಮೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಾಹಿತ್ಯ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಆಕಾಶವಾಣಿಗಾಗಿ ಮಾತಾಡಿಸುವ ಆಲೋಚನೆ ಬಂದಿತು. ನೇರವಾಗಿ ಅವರನ್ನು ಸ್ಟುಡಿಯೋಗೆ ಆಹ್ವಾನಿಸಿದೆವು. ಸಮಕಾಲೀನ ಸಾಹಿತ್ಯ, ಕಾವ್ಯ ಮತ್ತು ಕಾವ್ಯವನ್ನು ಬಗೆವ ಬಗೆ ಮುಂತಾದವುಗಳ ಕುರಿತು ಅರ್ಧ ಗಂಟೆ ಗಂಭೀರ ಚರ್ಚೆ ಸಾಗಿತು.

"  ಕಾವ್ಯವೆಂದರೆ ಒಂದು ನದಿಯ ಹಾಗೆ. ನದಿಯಲ್ಲಿ ಬೆರಳಿಟ್ಟರೆ  ಇಡೀ ನದಿ ಅನುಭವಕ್ಕೆ ಬರುವ ಹಾಗೆ ಒಂದು ಕವಿತೆ ಓದಿದರೆ ಕಾವ್ಯಚರಿತ್ರೆಯೇ ಅನಾವರಣವಾಗಬೇಕು. ಈ ಸಾತತ್ಯ ಕಂಡು ಬಂದರೆ ಮಾತ್ರ ಕಾವ್ಯದ  ಭಾರ ಮನವರಿಕೆಯಾಗುವುದು"
(ಚಿತ್ರದಲ್ಲಿ ಡಾ. ವಸಂತಕುಮಾರ ಪೆರ್ಲ ಮತ್ತು ಡಾ. ಎಚ್. ಎಸ್. ವಿ.)

No comments:

Post a Comment