Saturday 20 August 2011

ರಾಷ್ಟ್ರೀಯ ಕವಿಗೋಷ್ಟಿ



ರವೀಂದ್ರನಾಥ ಟಾಗೋರರ ೧೫೦ ನೇ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಇದೇ ದಿನಾಂಕ ೮ರ ಸೋಮವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಸಭಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಸರ್ವಭಾಷಾ ಕವಿಸಮ್ಮೇಳನ ಏರ‍್ಪಡಿಸಿತ್ತು. ತುಳು ಭಾಷೆಯನ್ನು ಪ್ರತಿನಿಧಿಸಿ ನಾನು, ತುಳುಭಾಷೆ, ಸಾಹಿತ್ಯದ ಸಂಕ್ಷಿಪ್ತ ಚರಿತ್ರೆಯನ್ನು ತಿಳಿಸಿ ಸುಮಾರು ಹತ್ತು ನಿಮಿಷ ಸ್ವರಚಿತ ಕವನಗಳನ್ನು ವಾಚಿಸಿದೆ. ಹಿರಿಯ ಕನ್ನಡ ಕವಿಗಳಾದ ಪ್ರೊ| ಜಿ. ಎಸ್. ಸಿದ್ಧಲಿಂಗಯ್ಯ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು.


Tuesday 16 August 2011

ಕಾಸರಗೋಡಿನಲ್ಲಿ ಅರ್ಥಾಳ ಸಂಗೀತ ಕಛೇರಿ


ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವದ ಅಂಗವಾಗಿ ದಿನಾಂಕ ೧೫ರ ಸೋಮವಾರದಂದು  ಕಾಸರಗೋಡಿನ ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯುವ ಕಲಾವಿದೆ ಅರ್ಥಾ ಪೆರ್ಲ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಜರುಗಿತು. ಪಕ್ಕವಾದ್ಯದಲ್ಲಿ ಬಳ್ಳಪದವು ವಿದ್ವಾನ್ ಶ್ರೀ ಯೋಗೀಶ ಶರ್ಮ (ಮೃದಂಗ) ಹಾಗೂ ಶ್ರೀ ಪ್ರಭಾಕರ ಕುಂಜಾರು (ಪಿಟೀಲು) ಸಹಕರಿಸಿದರು.

ಉಡುಪಿ ಪರ‍್ಯಾಯ ಸ್ವಾಮೀಜಿಯವರ ಸಂದರ್ಶನ


ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿ ಪರ‍್ಯಾಯ ಮಠಾಧೀಶರ ಚಿಂತನವನ್ನು ಮಂಗಳೂರು ಆಕಾಶವಾಣಿಯು ಪ್ರಸಾರ ಮಾಡುತ್ತ ಬಂದಿದೆ. ನಾಡಿದ್ದು ದಿನಾಂಕ ೨೨ರ ಸೋಮವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ. ಪರ‍್ಯಾಯ ಶಿರೂರು ಮಾಠಾಧೀಶರ ಸಂದೇಶವನ್ನು ಧ್ವನಿಮುದ್ರಿಸಲು ಇಂದು ಉಡುಪಿಗೆ ಹೋಗಿದ್ದೆವು. ಧ್ವನಿಮುದ್ರಣದ ಬಳಿಕ ಸ್ವಾಮೀಜಿ ಫಲಮಂತ್ರಾಕ್ಷತೆ ನೀಡಿ ನಮ್ನನ್ನು ಹರಸಿದರು. ಪಕ್ಕದಲ್ಲಿ ಪ್ರಸಾರ ನಿರ್ವಾಹಕ ಡಾ|| ಬಿ. ಎಂ. ಶರಭೇಂದ್ರಸ್ವಾಮಿ ಇದ್ದಾರೆ.