Monday 23 May 2011

ವರದಿ

    ಸಾಗರ ಹವಾಮಾನ ಮಾಹಿತಿ ಪ್ರಸಾರದ ಉದ್ಘಾಟನೆ

ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಾಗರ ಹವಾಮಾನ ಮಾಹಿತಿಯನ್ನು ಕಾರವಾರ ಆಕಾಶವಾಣಿ ಕೇಂದ್ರವು ಬಿತ್ತರಿಸಲು ತೊಡಗಿದೆ. ಈ ಮಾಹಿತಿಯಲ್ಲಿ ಗಾಳಿಯ ವೇಗ ಮತ್ತು ದಿಕ್ಕು, ಅಲೆಯ ಎತ್ತರ, ಉಬ್ಬರ ಇಳಿತ ಮತ್ತು ಮೀನಿನ ಲಭ್ಯತೆ ಬಗ್ಗೆ ಮಾಹಿತಿ ಇರುತ್ತದೆ. ಇದರಿಂದ ಬೆಸ್ತರಿಗೆ ಹಾಗೂ ಸಾಗರತಟದಲ್ಲಿ ವಾಸಿಸುವವರಿಗೆ ತುಂಬ ಅನುಕೂಲವಾಗಲಿದೆ. ಸಾಗರದಲ್ಲಿ ಭೂಮಿಯಂತೆ ತುಂಬ ಸಂಪನ್ಮೂಲ ಇರುವುದರಿಂದ ಬೆಸ್ತರು ತಮ್ಮ ಶ್ರಮ, ಸಮಯ ಮತ್ತು ಹಣವನ್ನು ಸಾರ್ಥಕವಾಗಿ ಹೂಡಬಹುದಾಗಿದ್ದು, ಈ ಮಾಹಿತಿಯಿಂದಾಗಿ ಅಧಿಕ ಮೀನುಬೆಳೆಯನ್ನು ಪಡೆಯಬಹುದಾಗಿದೆ. ಸೊತ್ತು ಮತ್ತು ಜೀವರಕ್ಷಣೆಗೂ ಅನುಕೂಲವಾಗಲಿದೆ.


ಪ್ರಸಾರ ಕಾರ್ಯಕ್ರಮವನ್ನು ಕಾರವಾರ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಡಾ. ವಸಂತಕುಮಾರ ಪೆರ್ಲ ಅವರು ದಿನಾಂಕ 20-5-2011 ರಂದು ಕಾರವಾರದಲ್ಲಿ  ವಿಧ್ಯುಕ್ತವಾಗಿ ಉದ್ಘಾಟಿಸಿದರು. ಚಿತ್ರದಲ್ಲಿ ಮೀನುಗಾರರ ಸಂಘದ ಅಧ್ಯಕ್ಷ ಪಿ.ಎಂ. ತಾಂಡೇಲ, ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ವಿ.ಎನ್. ನಾಯಕ್, ಸಾಗರ ಮಾಹಿತಿ ಸೇವಾ ಕೇಂದ್ರದ ಮುಖ್ಯಸ್ಥ ಡಾ. ಬಾಲಕೃಷ್ಣನ್ ನಾಯರ್ ಮತ್ತು ಮುಖ್ಯ ಸಂಶೋಧಕ ಡಾ.ಯು.ಜಿ. ಭಟ್ ಇದ್ದಾರೆ.

No comments:

Post a Comment