Sunday 24 April 2011

ಪೆರ್ಲರಿಗೆ "ರಂಗಸ್ವರೂಪ ಪ್ರಶಸ್ತಿ"


ಮಂಗಳೂರಿನ "ರಂಗಸ್ವರೂಪ-ರಂಗ ಅಧ್ಯಯನ ಕೇಂದ್ರ"ವು ಸ್ಥಾಪಿಸಿದ "ರಂಗಸ್ವರೂಪ ಪ್ರಶಸ್ತಿ"ಯನ್ನು ಸಾಹಿತ್ಯ-ಕಲೆ-ಸಂಸ್ಕೃತಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಡಾ.ವಸಂತಕುಮಾರ ಪೆರ್ಲ ಅವರಿಗೆ ದಿನಾಂಕ 23-4-2011ರಂದು ರಂಗಸ್ವರೂಪ ಪ್ರತಿಭಾಸಂಗಮ-2011ರ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.




ಸನ್ಮಾನ ಸ್ವೀಕರಿಸಿ ಡಾ.ವಸಂತಕುಮಾರ ಪೆರ್ಲ ಅವರು ಮಾತನಾಡುತ್ತಿರುವುದು. ವೇದಿಕೆಯಲ್ಲಿ 'ರಂಗಸ್ವರೂಪ'ದ ಅಧ್ಯಕ್ಷ ಪ್ರೇಮನಾಥ ಮರ್ಣೆ, ಗೌರವ ಸಲಹೆಗಾರ ಆದಮ್ ಖಾನ್, ಶಿಬಿರ ನಿರ್ದೇಶಕ ರೆಹಮಾನ್, ಶಿಕ್ಷಕಿ ಶ್ರೀಮತಿ ನಂದಿನಿ, ಉದ್ಯಮಿ ಬದ್ರುದ್ದೀನ್ ಕುಳೂರು ಹಾಗೂ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ತಿಪ್ಪೇಶ್ ಅವರನ್ನು ಕಾಣಬಹುದು.



No comments:

Post a Comment